Posts

Showing posts from August, 2017

ಮುಗಿಲೂರಿಗೊಂದು ಪಯಣ...

Image
                    ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ.           ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು.           4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದಾಗಲೇ ಗಡಿಯಾರ 12:30 ತೋರಿಸಿತ್ತು. ಎಲ್ಲರೂ ಸುಸ್ತಾಗಿ ಕೂತಿರಬೇಕಾದ್ರೆ ಒಬ್ಬ ಫ್ರೆಂಡ್ " ಕಾರ್ ಇದೆ ಫ್ರೆಂಡ್ಸ್ ಯಾಕೆ ಎಲಾದ್ರೂ ಹೋಗಬಾರದು" ಅಂತಾ ಕೇಳಿದ. ಅದಕ್ಕೆ ಎಲ್ಲಿ ಹೊಗೋದು

70 ವರ್ಷ ತುಂಬಿದ ಸ್ವತಂತ್ರ ಭಾರತೀಯ.

Image
                  ಭಾರತ ಸ್ವಾತಂತ್ರ್ಯವನ್ನು ಪಡೆದು ಇಲ್ಲಿಗೆ ಎಪ್ಪತ್ತು ವರ್ಷ ತುಂಬಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆವಾಗ ದೇಶ ಎಲ್ಲಿತ್ತು, ಇವಾಗ ಎಲ್ಲಿ ಬಂದು ನಿಂತಿದೆ ಎನ್ನುವುದು ಮುಖ್ಯವಾದ ವಿಷಯ. 1947  ಆಗಸ್ಟ್ 14 ರ ಮಧ್ಯರಾತ್ರಿ ಅನೇಕ ದೇಶಪ್ರೇಮಿಗಳ ಪ್ರಾಣ ತ್ಯಾಗದಿಂದ , ಹಿಂಸೆ ಮತ್ತು ಅಹಿಂಸಾತ್ಮಕ ಚಳವಳಿಗಳಿಂದ ನಮ್ಮ ದೇಶ ಸ್ವತಂತ್ರ ಭಾರತವಾಯಿತು. ಅಬ್ಬ ಬ್ರಿಟಿಷರ ಕಾಲ ಕಳೆದಾಯಿತು ಅನ್ನುವಷ್ಟರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ರಾಕ್ಷಸರ ಉದಯ . ಈ ಚಂಡ ಮುಂಡರ ಅಟ್ಟಹಾಸದ ನಡುವಲ್ಲಿ ಭಾರತಾಂಬೆ ಅಭಿವೃದ್ಧಿಯ ಪಥದತ್ತ ಸಿಂಹವನ್ನೇರಿ ತನ್ನ ನಡೆ ಆರಂಭಿಸಿದಳು. ತನ್ನ ಮೊದಲನೆಯ ಹೆಜ್ಜೆ ಪೂರ್ಣಗೊಳಿಸುವಷ್ಟರಲ್ಲಿ ರಾಮರಾಜ್ಯದ ಕನಸನ್ನು ಹೊತ್ತ, ಸ್ವಾತಂತ್ರ್ಯದ ರೂವಾರಿ ಗಾಂಧೀಜಿಯ ಅಗಲುವಿಕೆ ಆಘಾತವನ್ನೇ ನೀಡಿತು. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧ , ತುರ್ತು ಪರಿಸ್ಥಿತಿ, ರಾಜಕೀಯ ಅಸಮತೋಲನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರ, ಭಯೋತ್ಪಾದಕರ ದಾಳಿ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಏಳು ಬೀಳುಗಳನ್ನು ಕಂಡು ಎಪ್ಪತ್ತು ಹೆಜ್ಜೆಗಳನ್ನು ಪೂರ್ಣಗೊಳಿಸಿದೆ .           ಭಾರತದ ರಾಜಕೀಯ ವ್ಯವಸ್ಥೆ ಎನ್ನುವುದು ಭಾರತಾಂಬೆಯ ಸಿಂಹವಾಹನದಂತೆ. ಭಾರತ ಎಪ್ಪತ್ತು ವರ್ಷದಲ್ಲಿ ಅನೇಕ ನೀಚ,ಅತೀನೀಚ,ಉಚ್ಚ ರಾಜಕಾರಣಿಗಳನ್ನು ಕಂಡಿದೆ. ಮತದಾನ ಎಂದರೆ ಒಳ್ಳೆಯವರ ಆಯ್ಕೆಯ ಬದಲು