Posts

Showing posts from 2017

ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ…

Image
ಪ್ರೀತಿ ಹೇಗೆ..? ಎಲ್ಲಿ..? ಯಾರ ಮೇಲೆ ಆಗುತ್ತೆ ಅಂತ ಗೊತ್ತೇ ಆಗಲ್ಲ. ಅದಕ್ಕೆ ಜಾತಿ ಇಲ್ಲ, ಬಣ್ಣ ಇಲ್ಲ ಅದು ಭಾವನೆಗಳ ಬೆಸುಗೆ, ಮನಸ್ಸುಗಳ ಬಂಧನ. ಪ್ರೀತಿಗೆ ಏನು ಬೇಕಾದರೂ ಗೆಲ್ಲುವ ಶಕ್ತಿ ಇರುತ್ತೆ, ಹಾಗೆಯೇ ಪ್ರೀತಿಗೆ ಎದುರು ಆಗುವ ಅಡೆತಡೆಗಳು ಜಾಸ್ತಿ. ಯಾರ ಜೊತೆಗಾದರೂ ಸ್ವಲ್ಪ ದಿನ ಜೊತೆಯಾಗಿದ್ದು ಅದು ಪ್ರೀತಿನಾ..? ಗೆಳೆತನನಾ..? ಅನ್ನುವ ಸಂಶಯ ದೂರ ಆಗಿ, ಇದು ಪ್ರೀತಿನೇ ಅಂತ ಅರಿವಾಗುವುದರೊಳಗೆ ಅವರು ದೂರ ಆಗಬಹುದು. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಪ್ರೀತಿ ಹೇಳಿಕೊಳ್ಳದೆ ಇರಬಹುದು ಅಥವಾ ನಮ್ಮ ಕರ್ತವ್ಯಗಳಿಗೆ, ಗುರಿಗಳಿಗೆ ನಮ್ಮ ಪ್ರೀತಿ ಬಲಿಯಾಗಬಹುದು. ಒಟ್ಟಿನಲ್ಲಿ ಪ್ರೀತಿ ಪಡೆದುಕೊಂಡವನು ಪುಣ್ಯವಂತ, ಪ್ರೀತಿಯನ್ನು ಬೇರೆ ಯಾವುದಕ್ಕೋ ತ್ಯಾಗ ಮಾಡಿದವನು ತ್ಯಾಗಮಯಿ. ಲೋಕಾನೇ ಹಾಗೇ ಅಲ್ವಾ ಏನಾದ್ರೂ ಪಡೆದುಕೊಳ್ಳಬೇಕಾದರೆ ಬೇರೆ ಏನಾದ್ರೂ ಕಳೆದುಕೊಳ್ಳಲೇಬೇಕು. ನಾನು ಹೇಳುತ್ತಿರುವ ಕತೆಯೂ ಇದೇ ರೀತಿಯ ಒಂದು ಪ್ರೀತಿಗೆ ಸಂಬಂಧಪಟ್ಟಿದ್ದು. ಅರುಣ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್, ಸ್ವಂತ ಊರು ಕರಾವಳಿಯ ಕುಂದಾಪುರವಾದರೂ ಮೂರು ವರ್ಷಗಳಿಂದ ಬೆಂಗಳೂರು ಎನ್ನುವ ಸಾಫ್ಟ್ವೇರ್ ಪ್ರಪಂಚದಲ್ಲಿ ನನ್ನ ಲೈಫ್ ಅನ್ನು ಕಟ್ಟಿಕೊಳ್ಳಲಿಕ್ಕೆ ಹರಸಾಹಸ ಪಡುತ್ತಿರುವ ಮುದ್ದು, ಪೆದ್ದು ಹುಡುಗ. ಮೂರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು ಸಂಬಳದಲ್ಲಿ ಜಾಸ್ತಿ ಇಲ್ಲ ಅನ್ನೋದೊಂದು ಬಿಟ್ಟರೆ, ಇವನ ಖರ್ಚಿಗ

ಬಹಮನಿ ನಾಡು ಬೀದರ್.

Image
ಕರ್ನಾಟಕದ ಉತ್ತರದ ತುತ್ತ ತುದಿ, ಕರ್ನಾಟಕದ ಕಲಶವೆಂದು ಪ್ರಖ್ಯಾತವಾಗಿರುವುದು ಬೀದರ್ ಜಿಲ್ಲೆ. ಪೂರ್ವದಲ್ಲಿ ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ದಕ್ಷಿಣದಲ್ಲಿ ಕಲಬುರಗಿ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು  ಔರಾದ್, ಬಸವಕಲ್ಯಾಣ, ಬಾಲ್ಕಿ, ಬೀದರ್ ಮತ್ತು ಹುಮ್ನಾಬಾದ್ ಎನ್ನುವ ೫ ತಾಲ್ಲೂಕುಗಳನ್ನು ಒಳಗೊಂಡಿದೆ. ಪೌರಾಣಿಕವಾಗಿ ಬೀದರ್ ಜಿಲ್ಲೆಯನ್ನು ನೋಡುವುದಾದರೆ, ಮಹಾಭಾರತದ ವಿದುರಾನಗರ ಇದಾಗಿತ್ತು. ಹಾಗೆಯೇ ನಳದಮಯಂತಿಯರು ಮೊದಲು ಭೇಟಿಯಾದದ್ದು ಇದೇ ಬೀದರ್ ನಲ್ಲಿ. ಇನ್ನು ಇತಿಹಾಸಕ್ಕೆ ಬಂದರೆ ಮೌರ್ಯರು, ಸಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹಾಗೂ ಹೈದರಾಬಾದ್ ನಿಜಾಮರು ಬೀದರನ್ನು ಆಳಿದ್ದಾರೆ. ರಾಷ್ಟ್ರಕೂಟರ ಮೊದಲ ರಾಜಧಾನಿಯಾದ ಮಯೂರ ಕಂಡಿ (ಮೊರಖಂಡಿ) ಇವಾಗಿನ ಬೀದರ್. ಚಾಲುಕ್ಯರ ರಾಜಧಾನಿಯಾಗಿದ್ದಂತಹ ಕಲ್ಯಾಣಿ ಇರುವುದು ಸಹ ಇದೇ ಬೀದರ್ ನಲ್ಲಿ. ಬಹಮನಿ ಅರಸರು ರಾಜಧಾನಿಯನ್ನು ಕಲಬುರಗಿಯಿಂದ ಬೀದರಿಗೆ ೧೪೨೫ ರಲ್ಲಿ ಬದಲಿಸಿದರು. ೧೫೧೮ ರವರೆಗೆ ಬೀದರ್ ಬಹಮನಿ ಸುಲ್ತಾನರ ರಾಜಧಾನಿಯಾಗಿ ಮೆರೆದಿತ್ತು. ಬಹಮನಿ ಸಮಾಧಿ. ಇನ್ನು ಇತ್ತೀಚಿನ ಇತಿಹಾಸಕ್ಕೆ ಬಂದ್ರೆ ಸ್ವಾತಂತ್ರ್ಯಪೂರ್ವದಲ್ಲಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಬೀದರ್ ಒಳಪಟ್ಟಿತ್ತು. ೧೭ ಸೆಪ್ಟೆಂಬರ್ ೧೯೪೮ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಇಂಡಿಯನ್ ಆರ್ಮಿ ಯೊಂ

ನೆಟ್ ವರ್ಕ್ ಇಲ್ಲದ ಊರಿನಲ್ಲೊಂದು ಯಕ್ಷಗಾನ…!?

Image
ಯಕ್ಷಗಾನ ಕಲಾವಿದರು ತಮ್ಮ ತಮ್ಮ ಮೇಳಗಳನ್ನು ಸೇರಿಕೊಂಡು ವರ್ಷದ ತಿರುಗಾಟದ ಆರಂಭದ ಹೊಸ್ತಿ ನಲ್ಲಿದ್ದಾರೆ. ಹೋದ ವರ್ಷ ಒಂದು ಮೇಳದಲ್ಲಿದ್ದವರು, ಈ ವರ್ಷ ಇನ್ನೊಂದು ಮೇಳ ಸೇರಿಕೊಂಡಿರುವುದು ಒಂದು ಕಡೆ ಆದರೆ, ಒಂದೇ ಸಂಸ್ಥೆಯಿಂದ ನಡೆಸಲ್ಪಡುವ ಮೇಳಗಳಲ್ಲಿ ಕಲಾವಿದರ ಬದಲಾವಣೆ ಇನ್ನೊಂದು ಕಡೆಯಿಂದ ಸುದ್ದಿ ಮಾಡುತ್ತಾ ಇದೆ. “ಸಾಕಪ್ಪ, ಇನ್ನು ಸ್ವಲ್ಪ ವಿಶ್ರಾಂತಿ ಪಡೆಯೋಣ ” ಅಂತ ಕೆಲವರು ಮೇಳಗಳನ್ನು ಬಿಟ್ಟು ಅತಿಥಿ ಕಲಾವಿದರ ಸ್ಥಾನವನ್ನು ಅಲಂಕರಿಸಿದ್ದಾರೆ. ಡೇರೆ ಮೇಳಗಳು ಈ ವರ್ಷ ಜನರನ್ನು ರಂಜಿಸಲು ಯಾವ ನೂತನ ಪ್ರಸಂಗಗಳೊಂದಿಗೆ ದಾಂಗುಡಿ ಇಡುತ್ತಿವೆ ಎಂದು ಜನ ಕಾತರರಾಗಿದ್ದಾರೆ. “ಏನಪ್ಪಾ ಇದು, ನೆಟ್ ವರ್ಕಿಗೂ ಯಕ್ಷಗಾನಕ್ಕೂ ಏನು ಸಂಬಂಧ ?” ಅಂತ ಶೀರ್ಷಿಕೆ ಓದಿದವರಿಗೆ ಒಂದು ಸಂದೇಹ ಬಂದಿರಬಹುದು. ಆಧುನಿಕ ತಂತ್ರಜ್ಞಾನದ ಮಾಯಾಲೋಕದಲ್ಲಿ ಮುಳುಗಿರುವಂತಹ ಪ್ರಸಕ್ತ ಸಮಾಜದಲ್ಲಿ ಅನೇಕ ಪಾರಂಪರಿಕ ಕಲಾ ಪ್ರಕಾರಗಳ ಪರಿಚಯ ಇಲ್ಲದಾಗಿದೆ. ಹಾಗಾಗಿ ನೆಟ್ ವರ್ಕಿಗೂ ಯಕ್ಷಗಾನಕ್ಕೂ ಇರುವ ಸಂಬಂಧ ಸ್ವಲ್ಪ ಹೊತ್ತಲ್ಲೇ ನಿಮಗೆ ಗೊತ್ತಾಗುತ್ತೆ. ನನ್ನ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಯಕ್ಷಗಾನ ಹರಕೆ ಬಯಲಾಟವನ್ನು ಆಯೋಜಿಸಿದ್ದರು. ಗೆಳೆಯ ತುಂಬಾ ಆತ್ಮೀಯ ನಾದ್ದರಿಂದ ಹೋಗಲೇಬೇಕಾದ ಪರಿಸ್ಥಿತಿ ಎದುರಾಯಿತು. ಮಧ್ಯಾಹ್ನದ ಭೋಜನಕ್ಕೆ ಹೋಗಲು ಸಾಧ್ಯವಾಗದೆ ಇದ್ದಿದ್ದರಿಂದ ಸಂಜೆ ಹೋಗಿ ಮುಖ ತೋರಿಸಿ ಬರೋಣ ಅಂತ ಸುಮಾರು ೪ ಗಂಟೆ ಹೊತ್

ಅವಳ್ಯಾಕೆ ನಗಲಿಲ್ಲಾ, ನನ್ನ ಮುಖ ನೋಡಿ...!?

Image
          ಇಂಜಿನಿಯರಿಂಗ್ ಓದುತ್ತಿದ್ದ ದಿನಗಳವು, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ಸೈಕಲ್ ಸರಿಯಾಗಿ ತುಳಿದು EC ಬ್ರಾಂಚ್ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್ ಹುಡುಗ, ನನ್ನಷ್ಟಕ್ಕೆ  ನಾನು ಕಾಲೇಜಿಗೆ ಬರ್ತಾ ಇದ್ದೆ ಕಾರ್ನರ್ ಸೀಟ್ ನಲ್ಲಿ ಕುರ್ತಾ ಇದ್ದೇ , ಲೆಕ್ಚರ್ಸ್ ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾ ಲೋಕದಲ್ಲಿ ನನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೇ. ಹನುಮಂತನ ವಂಶದವರು ನಾವು ಹಾಗಾಗಿ ಕಾಲೇಜು ಆರಂಭವಾಗಿ ಎರಡು ಸೆಂ ಕಳೆದ್ರು ಹುಡುಗರನ್ನು ಬಿಟ್ಟು ,ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು . ಹುಟ್ಟಿನಿಂದ ಬಾಯ್ಸ್ ಸ್ಕೂಲ್ ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ .           ಹೀಗೆ ನಡೆತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತ್ಲು . ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್ ಸೀಟ್ ನೋಡಿ ನನ್ನ ಮಗಂದು ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿಕ್ಕೆ ಯಾಕೋ ಜಾಸ್ತಿ ಖುಷಿ.  ಹೇಗೆ ಹೇಗೋ ಹೋಗ್ತಾ ಇದ್ದವನು ಸ್ವಲ್

ಮುಗಿಲೂರಿಗೊಂದು ಪಯಣ...

Image
                    ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ.           ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು.           4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದಾಗಲೇ ಗಡಿಯಾರ 12:30 ತೋರಿಸಿತ್ತು. ಎಲ್ಲರೂ ಸುಸ್ತಾಗಿ ಕೂತಿರಬೇಕಾದ್ರೆ ಒಬ್ಬ ಫ್ರೆಂಡ್ " ಕಾರ್ ಇದೆ ಫ್ರೆಂಡ್ಸ್ ಯಾಕೆ ಎಲಾದ್ರೂ ಹೋಗಬಾರದು" ಅಂತಾ ಕೇಳಿದ. ಅದಕ್ಕೆ ಎಲ್ಲಿ ಹೊಗೋದು

70 ವರ್ಷ ತುಂಬಿದ ಸ್ವತಂತ್ರ ಭಾರತೀಯ.

Image
                  ಭಾರತ ಸ್ವಾತಂತ್ರ್ಯವನ್ನು ಪಡೆದು ಇಲ್ಲಿಗೆ ಎಪ್ಪತ್ತು ವರ್ಷ ತುಂಬಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆವಾಗ ದೇಶ ಎಲ್ಲಿತ್ತು, ಇವಾಗ ಎಲ್ಲಿ ಬಂದು ನಿಂತಿದೆ ಎನ್ನುವುದು ಮುಖ್ಯವಾದ ವಿಷಯ. 1947  ಆಗಸ್ಟ್ 14 ರ ಮಧ್ಯರಾತ್ರಿ ಅನೇಕ ದೇಶಪ್ರೇಮಿಗಳ ಪ್ರಾಣ ತ್ಯಾಗದಿಂದ , ಹಿಂಸೆ ಮತ್ತು ಅಹಿಂಸಾತ್ಮಕ ಚಳವಳಿಗಳಿಂದ ನಮ್ಮ ದೇಶ ಸ್ವತಂತ್ರ ಭಾರತವಾಯಿತು. ಅಬ್ಬ ಬ್ರಿಟಿಷರ ಕಾಲ ಕಳೆದಾಯಿತು ಅನ್ನುವಷ್ಟರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ರಾಕ್ಷಸರ ಉದಯ . ಈ ಚಂಡ ಮುಂಡರ ಅಟ್ಟಹಾಸದ ನಡುವಲ್ಲಿ ಭಾರತಾಂಬೆ ಅಭಿವೃದ್ಧಿಯ ಪಥದತ್ತ ಸಿಂಹವನ್ನೇರಿ ತನ್ನ ನಡೆ ಆರಂಭಿಸಿದಳು. ತನ್ನ ಮೊದಲನೆಯ ಹೆಜ್ಜೆ ಪೂರ್ಣಗೊಳಿಸುವಷ್ಟರಲ್ಲಿ ರಾಮರಾಜ್ಯದ ಕನಸನ್ನು ಹೊತ್ತ, ಸ್ವಾತಂತ್ರ್ಯದ ರೂವಾರಿ ಗಾಂಧೀಜಿಯ ಅಗಲುವಿಕೆ ಆಘಾತವನ್ನೇ ನೀಡಿತು. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧ , ತುರ್ತು ಪರಿಸ್ಥಿತಿ, ರಾಜಕೀಯ ಅಸಮತೋಲನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರ, ಭಯೋತ್ಪಾದಕರ ದಾಳಿ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಏಳು ಬೀಳುಗಳನ್ನು ಕಂಡು ಎಪ್ಪತ್ತು ಹೆಜ್ಜೆಗಳನ್ನು ಪೂರ್ಣಗೊಳಿಸಿದೆ .           ಭಾರತದ ರಾಜಕೀಯ ವ್ಯವಸ್ಥೆ ಎನ್ನುವುದು ಭಾರತಾಂಬೆಯ ಸಿಂಹವಾಹನದಂತೆ. ಭಾರತ ಎಪ್ಪತ್ತು ವರ್ಷದಲ್ಲಿ ಅನೇಕ ನೀಚ,ಅತೀನೀಚ,ಉಚ್ಚ ರಾಜಕಾರಣಿಗಳನ್ನು ಕಂಡಿದೆ. ಮತದಾನ ಎಂದರೆ ಒಳ್ಳೆಯವರ ಆಯ್ಕೆಯ ಬದಲು

ನಿನ್ನ ಮದುವೆ ಯಾವಾಗ...?

Image
          ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರ ಮದುವೆಗೆ ತೆರಳಿದಾಗ ಒಂದು ಆಶ್ಚರ್ಯ ಕಾದಿತ್ತು. ಇಷ್ಟು ದಿನಾ "ನಿನಗೆ ಮಾರ್ಕ್ ಎಷ್ಟು ?", "ಏನು ಓದುತ್ತಾ ಇರೋದು ?", "ಯಾವ ಕಾಲೇಜು ?", "ಎಲ್ಲಿ ಕೆಲಸ ಮಾಡಿಕೊಂಡಿರೋದು ?", "ಸಂಬಳ ಎಷ್ಟು ?" ಅಂತೆಲ್ಲಾ ಕೇಳುತ್ತಿದ್ದ ಸಂಬಂಧಿಕರ ಪ್ರಶ್ನೆ ಅವತ್ತು ಬೇರೆ ಆಗಿತ್ತು. ಭೇಟಿಯಾದ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡಪ್ಪ, ದೊಡಮ್ಮ, ಅತ್ತೆ, ಮಾವ ಯಾರು ಸಿಕ್ಕಿದ್ರು "ಮುಂದೆ ನಿಂದೆ ಮದುವೆ", "ನಿನ್ನ ಮದುವೆ ಯಾವಾಗ ?", "ನೀನೆ ನೋಡಿಕೊಂಡಿದ್ಯೋ, ಅಥವಾ ತಂದೆ ತಾಯಿಗೆ ಬಿಟ್ಟಿದ್ಯೋ" ಅನ್ನೋ ಮಾತುಗಳು ಹೆಚ್ಚಾಗಿತ್ತು. ಇಂತಹಾ ಮಾತುಗಳನ್ನು ಕೇಳಿ ಮನಸ್ಸು ಕುಣಿತಾ ಇದ್ರೂ, ತೋರಿಸಿಕೊಳ್ಳಲಿಕ್ಕೆ ಆಗ್ತಾ ಇರಲಿಲ್ಲಾ.           ಇಂತಹಾ ಪ್ರಶ್ನೆಗಳು ನನಗೆ ಮಾತ್ರ ಅಲ್ಲಾ, ಶಿಕ್ಷಣ ಮುಗಿಸಿ ಒಳ್ಳೆಯ ಕೆಲಸದಲ್ಲಿರುವ, ೨೩ ರಿಂದ ೨೮ ವರ್ಷ ವಯಸ್ಸಿನಲ್ಲಿರುವ ಹುಡುಗ/ಹುಡುಗಿಯರಿಗೆ ಸರ್ವೇ ಸಾಮಾನ್ಯ. ನನ್ನಂತೆ ಈ ವಯೋಮಿತಿಯಲ್ಲಿರುವ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ ಒಂದೇ "ಮದುವೆ ಆಗಲು ಸರಿಯಾದ ವಯಸ್ಸು ಯಾವುದು ?". ಈ ಸಮಯದಲ್ಲಿ ಶಿಕ್ಷಣ ಮುಗಿಸಿ, ಒಂದು ಕೆಲಸ ಹಿಡಿದು ಒಂದು ಹಂತಕ್ಕೆ ಬಂದ್ವೀ ಅಂತಾ ಹೇಳ್ಬೇಕಾದ್ರೆ "ಮದುವೆ" ಅನ್ನುವ ಪದ ನಮ್ಮ ಜೀವನದ

"ತಂದೆ ಎನ್ನುವ ಪದವಿ" ಗಂಡು ಮಕ್ಕಳ ಕಣ್ಣಲ್ಲಿ...!!

Image
                  "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತಿಗನುಸಾರವಾಗಿ, ನಮ್ಮ ಸಮಾಜದಲ್ಲಿ ತಾಯಿಗೆ ಒಂದು ಉತ್ತಮವಾದ ಸ್ಥಾನಮಾನವನ್ನು ಕಲ್ಪಿಸಿದ್ದೇವೆ. ಆದರೆ ತಂದೆಗೆ ತಾಯಿಯಷ್ಟು ಮಹತ್ವವನ್ನು ನಮ್ಮ ಸಮಾಜ ಕೊಟ್ಟಂತೆ ಕಾಣುತ್ತಿಲ್ಲಾ. ಅದರಲ್ಲೂ ಗಂಡು ಮಕ್ಕಳಿಗೆ ತಂದೆ ಒಬ್ಬ ವಿಲನ್. ತಂದೆ ಅನ್ನುವುದು ಒಂದು ಅಧಿಕಾರ,ಅದೊಂದು ಪದವಿ,ಅದೊಂದು ಜವಾಬ್ಧಾರಿ. ಒಂದು ಒಳ್ಳೆಯ ಗಂಡು ಮಗನಾಗಿ ತಂದೆ ಬಗ್ಗೆ ಹೇಳುವ ಒಂದು ಸಣ್ಣ ಪ್ರಯತ್ನ.           ತಂದೆ ಎನ್ನುವ ಪದ,ಮಗುವಿನ ಜನನದೊಂದಿಗೆ ಜನ್ಮ ತಾಳುತ್ತೆ. ಅದರ ಜೊತೆ ಒಂದು ಜೀವದ ಜವಾಬ್ಧಾರಿಯೂ ಆ ಪದವಿಯ ಮೇಲೆ ಬೀಳುತ್ತೆ. ಆ ಕ್ಷಣದಲ್ಲಿ ತಂದೆಗೆ ಮಗನಾಗಿದ್ದವನು ತನ್ನ ಮಗುವಿಗೆ ತಂದೆ ಆಗುತ್ತಾನೆ. ಇಷ್ಟು ದಿನಗಳ ಕಾಲ ತಾನು ನಿಂತು ವೀಕ್ಷಿಸುತ್ತಿದ್ದಂತಹ ಸ್ಥಾನದಲ್ಲಿ ಕೂರುವ ಸರದಿ ಇವನದ್ದಾಗಿರುತ್ತದೆ. ಅದರಲ್ಲೂ ಹೆಣ್ಣು ಮಗು ಹುಟ್ಟಿತು ಅಂತಾ ಬೇಜಾರು ಮಾಡಿಕೊಳ್ಳುವವರು ಒಂದು ಕಡೆ ಆದರೆ, "ಮಗು ಯಾವುದಾದರೂ ಆಗಲಿ, ಹೆಂಡತಿ ಮಗು ಚೆನ್ನಾಗಿದ್ದರೆ ಸಾಕು" ಅಂತಾ ಸಂತೋಷ ಪಡುವವರು ಒಂದು ಕಡೆ. ಹಾಗೆಯೇ  "ನನಗೆ ತಂದೆ ಆಗುವ ಭಾಗ್ಯ ಯಾವಾಗ ಕರುಣಿಸುತ್ತಿಯಪ್ಪ" ಅಂತಾ ದೇವರ ಬಳಿ ಬೇಡಿಕೊಳ್ಳುವವರೂ ಒಂದು ಕಡೆ.          "ಬೇಜವ್ಧಾರಿ ಹುಡುಗ,ಸಮಯಕ್ಕೆ ಸರಿಯಾಗಿ ಮನೆಗೆ ಬರುವುದಿಲ್ಲಾ", ಅಂತೆಲ್ಲಾ ಬೈಯಿಸಿಕೊಳ್ಳ

ಸಣ್ಣ ಸಣ್ಣ ವಿಷಯದಲ್ಲಿರುವ ದೊಡ್ಡ ದೊಡ್ಡ ಸಂತೋಷಗಳು...

Image
                    ಒಂದು ಶುಕ್ರವಾರ ಸಂಜೆ,ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಇಬ್ಬರು ಯುವಕರು ಎದುರು ಬದುರು ಕೂತು ಹೋಗ್ತಾ ಇರ್ತಾರೆ. ಒಬ್ಬ ತಾನು ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಅಂತಾ, ಇದ್ದ ಕೆಲಸವನ್ನು ಬಿಟ್ಟು, ಮನೆಯವರ ಮಾತು ಕೇಳದೇ, ಆ ರೈಲಿನಲ್ಲಿ ಬೆಂಗಳೂರಿನ ದಾರಿ ಹಿಡಿದವನಾದರೆ. ಇನೊಬ್ಬ ಮೈಸೂರಿನಲ್ಲಿ ಕೆಲಸದಲ್ಲಿದ್ದುಕೊಂಡು, ತನ್ನ ದಿನದ ಕೆಲಸವನ್ನೆಲ್ಲಾ ಮುಗಿಸಿ, ವಾರಾಂತ್ಯವನ್ನು ತನ್ನ ಮನೆಯವರೊಂದಿಗೆ ಕಳೆಯಲು ಹೊರಟಿರುತ್ತಾನೆ. ಹೀಗೆ ಇಬ್ಬರು ಮಾತನಾಡಿಕೊಂಡು ಪರಿಚಯ ಮಾಡಿಕೊಳ್ಳುತ್ತಾರೆ. ಕೆಲಸದಲ್ಲಿರುವ ಹುಡುಗ ಸಂಗೀತ ನಿರ್ದೇಶಕನಾಗಬೇಕು ಅಂತಾ ಹೊರಟವನ ಬಳಿ ಕೇಳುತ್ತಾನೆ "ಯಾಕೆ ನೀವು ಅಷ್ಟು ಒಳ್ಳೇಯ ಕೆಲಸ ಬಿಟ್ಟು, ಈ ದಾರಿ ಹಿಡಿದಿದ್ದೀರಿ" ಅಂತಾ. ಅದಕ್ಕೆ ಅವನು "ನನಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಎತ್ತರದ ಹಂತಕ್ಕೆ ಹೋಗಬೇಕು, ಸಾವಿರಾರು ಜನರ ಮನಸ್ಸು ಗೆಲ್ಲಬೇಕು, ನನ್ನ ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯಬೇಕು, ಅನ್ನೋ ಆಸೆ ಇದೆ, ಅದಕ್ಕೋಸ್ಕರ ಈ ಪಯಣ" ಅಂತಾನೆ. ಹಾಗೆಯೇ ಅವನು ಕೆಲಸದಲ್ಲಿರುವ ಹುಡುಗನಿಗೆ ಮರು ಪ್ರಶ್ನೆ ಹಾಕುತ್ತಾನೆ "ನಿಮಗೆ ಇದೇ ತರಹ ಯಾವುದೇ ಗುರಿಗಳು ಇಲ್ಲವಾ" ಅಂತಾ. ಅದಕ್ಕೆ ಅವನು "ನನಗೂ ಇದೇ,ಈಗ ಇರುವ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಬೇಕು, ನನ್ನ ತಂಗಿಗೆ ಒಳ್ಳೇಯ ಹುಡುಗನನ್ನು ನೋಡಿ ಮದುವೆ ಮಾಡಬೇಕು, ನ

ಸಾಫ್ಟವೇರ್ ತವರೂರಲ್ಲಿ ನಿರುದ್ಯೋಗಿ ಕನ್ನಡಿಗ...

Image
                  ಸಾಫ್ಟವೇರ್ ಕ್ರಾಂತಿ ಭಾರತದಲ್ಲಿ ಪಾದಾರ್ಪಣೆಗೊಂಡ ಬಳಿಕ ಐಟಿ ಕ್ಷೇತ್ರದ ರಾಜಧಾನಿ ಹೊಣೆ ವಹಿಸಿಕೊಂಡಿದ್ದು ನಮ್ಮ ಕರ್ನಾಟಕದ ಬೆಂದಕಾಳೂರು A/s ಬೆಂಗಳೂರು. ಕೆಲವೇ ವರ್ಷಗಳಲ್ಲಿ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಹೆಸರನ್ನು ಕೇಳುವಂತೆ ಮಾಡಿದ್ದು ಇದೇ ಬೆಂಗಳೂರು. ಇಲ್ಲಿನ ವಾತಾವರಣ,ಸೌಲಭ್ಯಗಳ ಪೂರೈಕೆ,ಐಟಿ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸಹಕಾರದಿಂದ ಬಹುಬೇಗ ಅನೇಕ ಕಂಪೆನಿಗಳಿಗೆ ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಕ್ಷೇತ್ರ ಮಾಡಿಕೊಳ್ಳಲು ಸಹಕಾರಿಯಾಯಿತು. ಇತ್ತಿಚಿನ ವರದಿ ಪ್ರಕಾರ ಭಾರತದಲ್ಲಿರುವ ಒಟ್ಟು ಐಟಿ ಕಂಪೆನಿಗಳಲ್ಲಿ 35% ಕಂಪೆನಿಗಳು ಬೆಂಗಳೂರಿನಲ್ಲಿವೆ. ಸಣ್ಣ ಪುಟ್ಟ ಕಂಪೆನಿಗಳು ಸೇರಿ ಒಟ್ಟು 5000 ಕಂಪೆನಿಗಳು ಬೆಂಗಳೂರು ಒಂದರಲ್ಲೆ ಇವೆ ಅನ್ನುವುದು ಇತ್ತಿಚಿನ ಅಂಕಿ ಅಂಶ. ಐಟಿ ದಿಗ್ಗಜಗಳಾದ ಇನ್ಫೋಸಿಸ್,ವಿಪ್ರೋ,ಮೈಂಡ್ ಟ್ರೀ,ಎಂಪಸಿಸ್ ಇನ್ನೂ ಮುಂತಾದವುಗಳಿಗೆ ಬೆಂಗಳೂರು ಪ್ರಧಾನ ಕಛೇರಿ ಆದರೆ, ವಿದೇಶಿ ಕಂಪೆನಿಗಳಾದ ಇನಟೆಲ್,ಟೆಕ್ಸಾಸ್ಇನ್ಸಟ್ರುಮೆಂಟ್ಸ್,ಬೋಷ್,ಯಾಹೂ,ಸಾಪ್ ಲಾಬ್ಸ್ ಅಂತಹವುಗಳಿಗೆ ಭಾರತದ ಪ್ರಧಾನ ಕಛೇರಿ ಬೆಂಗಳೂರು. ಇಷ್ಟೇ ಅಲ್ಲದೇ ಕೆಲವು ಕಂಪೆನಿಗಳು ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ,ಮಂಗಳೂರಿನಲ್ಲೂ ಕಾರ್ಯ ನಿರ್ವಹಿಸುತ್ತಿವೆ.           ಈ ಕಂಪೆನಿಗಳು ಬಳಸುತ್ತಿರುವುದು ನಮ್ಮ ನಾಡಿನ ನೀರು,ವಿದ್ಯುತ್,ನೆಲ ಹಾಗೂ ಇನ್ನು ಅನೇಕ ಸ

ಕನಸಿನೂರಿನ ರಾಜಕುಮಾರಿ ಕಣ್ಣೆದುರು ಬಂದ ಸಮಯ...

Image
                  ಸಾಫ್ಟವೇರ್ ಅನ್ನೋ ಜಗತ್ತು ಆರಂಭವಾದ ಮೇಲೆ, ವಾರಾಂತ್ಯ ಅನ್ನೋ ಪದ ತುಂಬಾ ಮಹತ್ವ ಪಡೆದುಕೊಂಡಿತು. ಮದುವೆ,ನಿಶ್ಚಿತಾರ್ಥ,ನಾಮಕರಣದಂತಹ ಸಮಾರಂಭಗಳಿಂದ ದೂರವಿದ್ದಂತಹ ಯುವಜನತೆ, ಸಾಫ್ಟವೇರ್ ವೃತ್ತಿಯ ಹಿಂಬಾಲಕರಾದ ಮೇಲೆ ಹೆಚ್ಚೆಚ್ಚು ಇಂತಹ ಸಮಾರಂಭಗಳಲ್ಲಿ ಕಾಣಸಿಗುತ್ತಿದ್ದಾರೆ. ಅವರಿಗೆ ಕೆಲಸದ ಜಂಜಡಗಳಿಂದ ಇಂತಹ ಕಾರ್ಯಕ್ರಮಗಳು ವಿರಾಮ ನೀಡುತ್ತಿವೆ.           ನಾನೂ ಒಬ್ಬ ಸಾಫ್ಟವೇರ್ ಇಂಜಿನಿಯರ್. ಪ್ರಥಮ್ ಅಂತಾ ನನ್ನ ಅಪ್ಪ ಅಮ್ಮ ಹೆಸರಿಟ್ಟಿದ್ದಾರೆ. ಆಕಸ್ಮಿಕಗಳು,ನಾವು ಎಣಿಸದೇ ಇರುವ ಘಟನೆಗಳು ನನ್ನ ಜೀವನದಲ್ಲೂ ನಡೆಯುತ್ತೆ ಅಂತಾ ನಾನು ಯೋಚಿಸಲೇ ಇರಲಿಲ್ಲ. ದೇವನೆಂದರೆ ಅವನೇ, ನಾವು ಐದು ರೀತಿಯಲ್ಲಿ ಚಿಂತಿಸಿದರೆ ಆರನೇ ರೀತಿಯಲ್ಲಿ ಅವನು ನಮ್ಮನು ಕರೆದುಕೊಂಡು ಹೋಗುತ್ತಾನೆ. ನನ್ನ ಅಮ್ಮನ ಮನೆಯಲ್ಲಿ ವಾರಾಂತ್ಯ ಸತ್ಯನಾರಾಯಣ ಕಥೆ ಪೂಜೆ ಇಟ್ಟುಕೊಂಡಿದ್ದರು. ನನಗೂ ಹೊಸ ವಾತಾವರಣ ಖುಷಿಕೊಡುತ್ತೆ ಅಂತಾ ಶುಕ್ರವಾರ ರಾತ್ರಿ ಹೊರಟು ನಿಂತೆ. ನನ್ನ ಅಮ್ಮನ ಮನೆ ಉಡುಪಿ ಜಿಲ್ಲೆಯ ಮಾಬುಕಳ ಅನ್ನೋ ಸಣ್ಣ ಗ್ರಾಮ. ಈ ಊರಿನ ಹೆಸರು ಕೇಳಿದ ತಕ್ಷಣ ನನ್ನ ಜೀವನದಲ್ಲಿ ನಡೆದ ಒಂದು ಘಟನೆ ನೆನಪಾಯಿತು-- ಅದು ನನ್ನ ಮನೆಯಲ್ಲಿ ನನ್ನ ಮದುವೆ ಪ್ರಸ್ತಾಪ ನಡೆಯುತ್ತಿದ್ದ ಸಮಯ. ನಾನು ಸಾಫ್ಟವೇರ್ ಇಂಜಿನಿಯರ್ ಆದ್ರೂ ಹುಡುಗಿ ತುಂಬಾ ಓದಿರಬೇಕು,ಕೆಲಸಕ್ಕೆ ಹೋಗಬೇಕು ಪಟ್ಟಣದವಳೇ ಆಗಿರಬೇಕು ಅನ್ನೋ ನಿಭಂಧನೆಗಳೇನು ಇರಲಿಲ್

ನೀ ಬರದ ಹಾದಿಯಲಿ ಒಬ್ಬನೇ ಸಾಗಿರುವೆ...

Image
                    ನಮಸ್ಕಾರ ನನ್ನ ಹೆಸರು ಸುಹಾಸ್ ಅಂತಾ ನಾನು ಹೇಳಲಿಕ್ಕೆ ಹೊರಟಿರೋದು ನನ್ನ ಲೈಫ್ ಅಲ್ಲಿ ಹೀಗೆ ಬಂದು ಹಾಗೆ ಹೋದ ಒಂದು ಸಣ್ಣದಾದ, ಸುಂದರವಾದ ಲವ್ ಸ್ಟೋರಿ ಅಲ್ಲಾ ಅಲ್ಲಾ ಲೈಫ್ ಸ್ಟೋರಿ. ಅವತ್ಯಾಕೋ ಆಫೀಸಿನಲ್ಲಿ ಕೈ ತುಂಬಾ ಕೆಲಸಗಳು ಇದ್ರು ಮಾಡಲಿಕ್ಕೆ ಮನಸ್ಸು ಇರಲಿಲ್ಲಾ. ಮನಸ್ಸಿನಲ್ಲಿ ಏನೋ ತಳ-ಮಳ,ಇನ್ನೂ ಕಾಲ ಮಿಂಚಿಲ್ಲ ಅನ್ನೋ ಭಾವನೆ. ಸಂಜೆ ಆಗೋ ತನಕ ಕಾದು,ಮನಸ್ಸನು ಸ್ವಲ್ಪ ಶಾಂತ ಮಾಡಿಕೊಳ್ಳೋಣ ಆಂತಾ ಸಮುದ್ರದ ಕಡೆಗೆ ಹೋದೆ. ಯಾಕಂದ್ರೇ ನಾಳೆ ನನ್ನ ಹುಡುಗಿ ಮದುವೆ ಆದ್ರೆ ಹುಡುಗ ಮಾತ್ರ ನಾನಲ್ಲ.           ನಾನು ಮತ್ತು ಅವಳು ಒಂದೇ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇರೋದು. ಸ್ನೇಹ ಮೊದಲಿನಿಂದಲೂ ಇಬ್ಬರ ನಡುವೆ ಇತ್ತು. ಆದ್ರೆ ಅದು ಪ್ರೀತಿಗೆ ತಿರುಗಿದ್ದೇ ಒಂದು ಅದ್ಭುತ. ಶುಕ್ರವಾರ ಸಂಜೆ ಅಮ್ಮನ ನೆನಪಾಗುತ್ತೆ ಅಂತಾ ಮನೆಗೆ ಹೋಗ್ತಾ ಇದ್ದವಳು. ತಿರುಗಿ ಬರುತ್ತಾ ಇದ್ದಿದ್ದು ಸೋಮವಾರ ಬೆಳಗ್ಗೆ. ಅವಳು ಬರುತ್ತಿದ್ದ ರೈಲು ಬೆಳ್ಳಂಬೆಳ್ಳಗೆ 4 ಗಂಟೆಗೆ ಸ್ಟೇಷನ್ಗೆ ಬರುತ್ತಾ ಇತ್ತು. ಪಾಪ ಅವ್ಳೊಬ್ಬಳಿಗೆ ಅವಳ ಪಿಜಿಗೆ ಹೋಗಲಿಕ್ಕೆ ಭಯ. ಹಾಗಾಗಿ ನನಗೆ ಹಿಂದಿನ ದಿನವೇ ಪೋನ್ ಮಾಡಿ ಸ್ಟೇಷನ್ಗೆ ಬರಲಿಕ್ಕೆ ಸಂಕೋಚ ಆದ್ರು ಹೇಳ್ತಾ ಇದ್ಲು. ನಾನು ಬೆಳ್ಳಗೆ 3 ಗಂಟೆಗೆ ಎದ್ದು ಹೋಗ್ತಾ ಇದ್ದೆ. ನನ್ನ ಜೊತೆ ಒಂದು ಬೀದಿ ನಾಯಿ ಕೂಡ ಬರುತ್ತಿತ್ತು ಅದಕ್ಕೆ ಬಿಸ್ಕೆಟ್. ಹಾಕ್ಕೊಂಡು ಇರುತ್ತಿದ್ದೆ. ಟ್ರೈನ್ ಬಂದ

ಕಲರ್ ಪುಲ್ ಕನಸು...

Image
                  ಮಕ್ಕಳೇ ಕನಸು ಕಾಣೀ ಅಂತಾ ಹೇಳಿದವರು ಭಾರತ ರತ್ನ ಅಬ್ದುಲ್ ಕಲಾಂ ಅವರು. ಕನಸು ಯಾರು ನೋಡಲ್ಲಾ ಹೇಳಿ, ಪ್ರತಿಯೊಬ್ಬರು ಕನಸು ಕಾಣ್ತಾರೆ. ಭಿಕ್ಷುಕನಿಗೆ ಹಣವಂತನಾಗುವ ಕನಸು. ಹಣವಂತನಿಗೆ ಇನ್ನೂ ಹೆಚ್ಚು ಹಣಗಳಿಸುವ ಕನಸು. ಮಕ್ಕಳಿದ್ದಾಗ ಆಟಿಕೆಯ ಕನಸು. ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಅಂಕಗಳಿಸುವ ಕನಸು. ಹಾಗೆಯೇ ಕನಸಿನ ಹುಡುಗಿ/ಹುಡುಗನ ಕನಸು. ಕಾಲೇಜು ಮುಗಿದ ಮೇಲೆ ಒಳ್ಳೆಯ ಉದ್ಯೋಗದ ಕನಸು. ಉದ್ಯೋಗ ದೊರಕಿದ ಮೇಲೆ ಮದುವೆ,ಮನೆ,ಕಾರಿನ ಕನಸು. ಆಮೇಲೆ ತಮಗೆ ಹುಟ್ಟುವ ಮಕ್ಕಳ ಭವಿಷ್ಯದ ಕನಸು. ಹೀಗೆ ಕನಸುಗಳಿಗೆ ಮಿತಿ ಇಲ್ಲ. ಯಾಕಂದ್ರೆ ಕನಸು ಕಾಣಲಿಕ್ಕೆ ದುಡ್ಡು ಕೊಡಬೇಕಿಲ್ಲ ನೋಡಿ.           ಯೌವನದಲ್ಲಿ ಹುಟ್ಟುವ ಕನಸುಗಳು ತುಂಬಾ ಸುಂದರವಾಗಿರುತ್ತೆ. ಯಾವುದೇ ತಲೆ ಬಿಸಿ ಇಲ್ಲದೇ ಜವಾಬ್ದಾರಿಗಳಿಲ್ಲದೇ ನಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಾ ಇರಬಹುದು. ಈ ಕಾಲದಲ್ಲಿ ಬೀಳುವ ಕನಸುಗಳು ನಮ್ಮ ಜೀವನವನ್ನು ಸಹಾ ರೂಪಿಸುತ್ತವೆ. ಒಂದು ಉತ್ತಮ ಭವಿಷ್ಯದ ಕನಸನ್ನು ಕಂಡು ಅದನ್ನು ಈಡೇರಿಸಿಕೊಳ್ಳಲಿಕ್ಕೆ ಭದ್ರ ಬುನಾದಿ ಹಾಕಲು ಯೌವನ ಸಕಾಲ. ಯೌವನದಲ್ಲಿ ಮುಖ್ಯವಾಗಿ ಎರಡು ತರಹದ ಕನಸುಗಳನ್ನು ಎಲ್ಲರೂ ನೋಡ್ತಾರೆ. ಒಂದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಇನ್ನೊಂದು ತಮ್ಮ ಲೈಪ್ ಪಾರ್ಟನರ್ ಬಗ್ಗೆ. ಒಂದು ಎತ್ತರದ ಸ್ಥಾನಕ್ಕೆ ಹೋಗಬೇಕು,ತುಂಬಾ ಹಣ ಮಾಡಬೇಕು,ಕೀರ್ತಿಗಳಿಸಬೇಕು ಅನ್ನೋದು ಒಂದು ರೀತಿ ಆದರೆ. ಮದುವೆ

ಪರೀಕ್ಷೆ ಅನ್ನೋ ಭೂತಕ್ಕೆ ಅವರವರ ಮಂತ್ರವಾದ...!!!

Image
          ಒಂದು ಶಾಲಾ ಆವರಣದ ಗಣಪತಿ ದೇವಸ್ಥಾನ. ಅವತ್ತು ಬೆಳ್ಳಂಬೆಳ್ಳಗೆ ಹುಡುಗಿಯರನ್ನು ನೋಡಲಿಕ್ಕೆ ದೇವಸ್ಥಾನಕ್ಕೆ ಬರುವವರು ಸಹ ದೇವರನ್ನು ನೋಡಲಿಕ್ಕೆ ಬಂದಿದ್ದರು. ಯಾಕೆಂದರೆ ಆ ದಿನದಿಂದ ಪರೀಕ್ಷೆ ಆರಂಭವಾಗುವುದಿತ್ತು. ಎಲ್ಲರೂ ಬೇಡಿಕೊಂಡು ಹೋದ ಮೇಲೆ ಗಣಪತಿ ಮತ್ತು ಮೂಷಿಕನ ನಡುವೆ ಒಂದು ಸಣ್ಣ ಸಂವಾದ. ಮೂಷಿಕ: ಅಯ್ಯಾ ಗಣರಾಯ.........ಎಲ್ಲರೂ ನಾನಾ ಬೇಡಿಕೆಗಳನ್ನು ನಿನ್ನ ಮುಂದಿಟ್ಟರು. ಕೆಲವರು ಉತ್ತೀರ್ಣನಾದರೆ ಸಾಕು ಅಂದರೆ ಇನ್ನೂ ಕೆಲವರು ನೂರಕ್ಕೆ ನೂರು ಬೇಕೆಂದು ಕೇಳಿಕೊಂಡರು ಇವರೆಲ್ಲರ ಬೇಡಿಕೆಗಳನ್ನು ಹೇಗೆ ನೆರವೇರಿಸುತ್ತಿಯ. ಗಣಪತಿ: ಇವರೆಲ್ಲರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಇರುವುದು ಒಂದೇ ಮಾರ್ಗ ಅದುವೇ ಪ್ರಶ್ನೆಪತ್ರಿಕೆಯನ್ನು ಸುಲಭವಾಗಿ ನೀಡುವುದು. ಮೂಷಿಕ: ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ನೀಡಿದರೂ,ಕೆಲವರು ಅನುತ್ತೀರ್ಣರಾಗಲು ಕಾರಣವೇನು. ಗಣಪತಿ: ಪ್ರಶ್ನೆ ಪತ್ರಿಕೆಗಳು ಎಲ್ಲರಿಗೂ ಸಮಾನವಾಗಿದ್ದರೂ ಅಂಕಗಳು ಅವರವರ ವಿಷಯ ಜ್ಞಾನ,ಅರ್ಥೈಸುವಿಕೆ,ಪರಿಶ್ರಮದ ಮೇಲೆ ನಿರ್ಧರಿತವಾಗಿರುತ್ತವೆ. ಒಳ್ಳೆಯ ರೀತಿಯಲ್ಲಿ ಪೂರ್ವ ತಯಾರಿ ಮಾಡಿದವನು ಒಳ್ಳೆಯ ಅಂಕಗಳನ್ನು ಪಡೆಯುತ್ತಾನೆ. ಏನನ್ನೂ ಮಾಡದವನಿಗೆ ಪ್ರಶ್ನೆ ಪತ್ರಿಕೆ ಸುಲಭ ಬಂದಿರುವುದೇ ತಿಳಿಯುವುದಿಲ್ಲ. ಜ್ಞಾನ ಸಂಪಾದನೆಗೆ ಮೆದುಳನ್ನು ನಾನು ನೀಡಿರುವಾಗ ಅದನ್ನು ಉಪಯೋಗಿಸದೇ ಕೇವಲ ನನ್ನ ಪಾದವನ್ನು ಹಿಡಿದುಕೊಂಡವನಿಗೆ ನಾನೇನು ಮಾಡಲು ಸ

ನಮಗೂ ಇದೇ ತರಹದ ಗೆಳೆಯರಿದ್ರು...!!!

Image
          ಜುಮುಗುಡುವ ಡಿಸೆಂಬರ್ ಚಳಿಯಲ್ಲಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳೋಣ ಅಂತಾ. ತಡರಾತ್ರಿ ನಾನು ಮತ್ತು ನನ್ನ ಫ್ರೇಂಡ್ ಸಮುದ್ರದಂಡೆಗೆ ಹೋಗಿದ್ವಿ. ಬಿಸಿ ಜಾಸ್ತಿಯಾಗಿ ಮನೆಗೆ ಹೋಗೊಣ ಅಂತಾ ನೋಡಿದ್ರೆ,ಗಾಡಿಯಲ್ಲಿ ಪೆಟ್ರೋಲ್ ಮುಗಿದುಹೋಗಿತ್ತು. ಅಮವಾಸ್ಯೆ ಕತ್ತಲು ಬೇರೆ. ಕೂಗಿ ಕರೆದರೂ ಹಾ ಅನ್ನಲಿಕ್ಕೆ ಜನ ಇರಲಿಲ್ಲಾ. ಅಂತಹಾ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ನಮ್ಮ ಫ್ರೇಂಡ್. ಅವನು ಹೇಗಿದನ್ನೋ,ಯಾವ ಪರಿಸ್ಥಿಯಲ್ಲಿ ಇದನ್ನೋ ಗೊತ್ತಿಲ್ಲಾ. ಆದ್ರೆ ನಮ್ಮ ಒಂದು ಪೋನ್ ಕಾಲ್ಗೆ ಪೆಟ್ರೋಲ್ ತಂದು ನಮ್ಮನು ಮನೆ ಸೇರಿಸ್ದಾ.           ಫ್ರೇಂಡ್‍ಶಿಪ್ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ. ಸ್ನೇಹಕ್ಕೆ ಬಡವ-ಶ್ರೀಮಂತ,ಮೇಲು ಜಾತಿ- ಕೀಳು ಜಾತಿ,ಬುದ್ದಿವಂತ-ದಡ್ಡ,ದೊಡ್ಡವರು- ಚಿಕ್ಕವರು ಅನ್ನೋ ಬಾರ್ಡರ್ ಇರೋದಿಲ್ಲಾ. ಮಳೆಗಾಲದಲ್ಲಿ ದೋಣಿ ಬಿಡುವಾಗ ಜೊತೆಯಲ್ಲಿದ್ದವನು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದಾಗ ಜೊತೆಯಲ್ಲಿ ನಿಂತವನು, ಸೈಕಲ್‍ನಲ್ಲಿ ಡಬಲ್ ರೈಡ್ ಮಾಡಿದವನು, ಮಾವಿನ ಮರಕ್ಕೆ ಕಲ್ಲು ಹೊಡೆಯುವಾಗ ಜೊತೆಯಲ್ಲಿದ್ದವನು, ಇನ್ನೊಬ್ಬನಿಗೆ ಹೊಡೆಯುವಾಗ ಕೈ ಸೇರಿಸಿದವನು, ಹುಡುಗಿಯರಿಗೆ ಲೈನ್ ಹೊಡೆಯುವಾಗ ಸಾಥ್ ಕೊಟ್ಟವನು, ಜಾತ್ರೆಯಲ್ಲಿ ಜೊತೆಯಲ್ಲಿ ಸುತ್ತಿದವನು, ಕ್ಲಾಸಿಗೆ ಬಂಕ್ ಮಾಡುವಾಗ ಹಿಂದೆ ಬಂದವನು, ಪರೀಕ್ಷೇಯಲ್ಲಿ ದಾರಿ ತೋರದಾಗ ದಾರಿ ತೋರಿಸಿದವನು, ಹೋಮ್‍ವರ್ಕ ಕಾಫಿ ಹೊಡೆಯಲು ಕೊಟ್ಟವನು. ಪ್